-->
Bookmark

Gajendragad : ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರೈತ, ಕೃಷಿ ಕೂಲಿಕಾರರಿಂದ ಸರ್ಕಾರಕ್ಕೆ ಆಗ್ರಹ

Gajendragad : ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರೈತ, ಕೃಷಿ ಕೂಲಿಕಾರರಿಂದ ಸರ್ಕಾರಕ್ಕೆ ಆಗ್ರಹ
ಗಜೇಂದ್ರಗಡ : (Jan_20_2023)
ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಆಗ್ರಹಿಸಿ ಜನೇವರಿ, 20/2024 ಇಂದು  ಗಜೇಂದ್ರಗಡ ತಹಶೀಲ್ದಾರ ಕಚೇರಿ ಮುಂದೆ ರೈತ ಕೃಷಿಕೂಲಿಕಾರರು ಕರ್ನಾಟಕ ಪ್ರಾಂತ್ಯ ರೈತ ಸಂಘ (KPRS) ಮತ್ತು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘ (AIAW) ತಾಲ್ಲೂಕು ಸಮಿತಿಗಳು ಗಜೇಂದ್ರಗಡ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಂ ಎಸ್ ಹಡಪದ ಅವರು ಮಾತನಾಡಿ ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತಲೂ ಅತೀ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಬರ ಪರಸ್ಥಿತಿ ಉಂಟಾಗಿದೆ. ಸಾಲ ಸೂಲ ಮಾಡಿ ಬೀಜ ರಸಗೊಬ್ಬರ ತಂದು ಬಿತ್ತನೆ ಮಾಡಿದ ರೈತನಿಗೆ ಬೆಳೆ ಬಾರದೇ ಇದ್ದುದ್ದರಿಂದ ರೈತರು ತೀವ್ರ ಸಾಲದ ಸುಳಿಗೆ ಸಿಲುಕಿದ್ದಾರೆ.ಪರಿಣಾಮ ರೈತರ ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕೃಷಿ ಕೂಲಿಕಾರರಿಗೆ ಕೆಲಸ ಸಿಗದಂತಾಗಿ ವಲಸೆ ಹೋಗುತ್ತಿದ್ದಾರೆ.ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿ ಜನ ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮತ್ತೊಂದಡೆ ಕೊಳವೆ ಬಾವಿಗಳು ಬತ್ತಿವೆ.ಮತ್ತೊಂದು ಕಡೆಗೆ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ.ರಾಜ್ಯ ಬಹುತೇಕ ಜಲಾಶಯಗಳು ಈಗಾಗಲೇ ಖಾಲಿಯಾಗುವ ಸ್ಥಿತಯಲ್ಲಿವೆ. ಈ ಬೀಕರ ಭರವನ್ನು ರಾಷ್ಟ್ರೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಗಾಲದ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ಬರಗಾಲ ಪರಿಹಾರ ನಿಧಿಯನ್ನು ನೀಡಬೇಕಾದ ಅವಶ್ಯಕತೆಯಿದೆ. 
ಇಂತಹ ಗಂಬೀರ ಸ್ಥಿತಿಯಲ್ಲಿ ರಾಜ್ಯದ ೨೫ ಜನ ಬಿಜೆಪಿ ಸಂಸದರು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಮೊತ್ತ ತರುವಲ್ಲಿ ಯಾವ ಪ್ರಯತ್ನ ಮಾಡುತ್ತಿಲ್ಲ.ಬದಲಿಗೆ ಅವರು ರಾಜ್ಯದಲ್ಲಿನ ಆಡಳಿತರೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕಾರಣ ಮಾಡುತ್ತ,ರಾಮ ಮಂದಿರ ನಿರ್ಮಾಣದ ವಿಷಯವನ್ನೆ ಪ್ರಧಾನವಾಗಿ ಮಾಡಿಕೊಂಡು ಕಾಲಕಳೆಯುತ್ತಿದ್ದಾರೆ.ಹೊರತು ರಾಜ್ಯದ ಭರ ನಿರ್ವಹಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ  ಕೊಡಿಸುವಲ್ಲಿ ರಾಜ್ಯ ರೈತರಿಗೆ ತೀವ್ರ ಅನ್ಯಾಯ ಮಾಡುತ್ತಿದ್ದಾರೆ.ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಸ್ಥಳೀಯವಾಗಿ ರೈತರ ಬೇಡಿಕೆಗಳನ್ನು ಒಳಗೊಂಡ ಈ ಕೆಳಗಿನ ಹಕ್ಕೊತ್ತಾಗಳಿಗೆ ಆಗ್ರಹಿಸಿ ಇಂದು ತಹಶೀಲ್ದಾರ ಕಚೇರಿ ಎದುರಿಗೆ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕರರ ಸಂಘಗಳ ಗಜೇಂದ್ರಗಡ ತಾಲ್ಲೂಕ ಸಮಿತಿಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸುತ್ತಿದ್ದೆವೆ ಎಂದರು.

ಹೋರಾಟದ ಹಕ್ಕೊತ್ತಾಯದ ಬೇಡಿಕೆಗಳು : 

೧) ಬರಗಾಲದ ನಿಮಿತ್ಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ವರ್ಷದಲ್ಲಿ ೧೦೦ ದಿನಗಳ ಬದಲಿಗೆ ೨೦೦ ದಿನಗಳ ಕೆಲಸ ನೀಡಬೇಕು. 
೨) ಬರಗಾಲದಲ್ಲಿ ಕೂಲಿಕಾರರ ಕನಿಷ್ಠ ದಿನಗೂಲಿಯನ್ನು ದಿನಕ್ಕೆ ರೂ.೬೦೦ ಗಳಿಗೆ ಹೆಚ್ಚಿಸಬೇಕು. 
೩) ರೈತರು ಬ್ಯಾಂಕುಗಳಿAದ ಪಡೆದಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. 
೪) ಮೈಕ್ರೋ ಪೈನಾನ್ಸ ಮೂಲಕ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. 
೫) ವಲಸೆ ಕಾರ್ಮಿಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. 
೬) ಬರಗಾಲದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. 
                     
ಸ್ಥಳೀಯ ಬೇಡಿಕೆಗಳು : 

೧)ಗಜೇಂದ್ರಗಡ-ರೋಣ ತಾಲ್ಲೂಕುಗಳ ಬಗರ್ ಹುಕುಂ ಸಾಗುವಳಿದಾರ ರೈತರ ಅರ್ಜಿಗಳನ್ನು ಪರಿಶಿಲನೆ ಮಾಡಲು ಮಾನ್ಯ ಶಾಸಕರ ನೇತೃತ್ವದಲ್ಲಿ ಬಗರ್ ಹುಕುಂ ಸಮಿತಿ ತಕ್ಷಣವೇ ರಚಿಸಬೇಕು.ಮತ್ತು ಭೂಮಿ ಹಂಚಲು ಅಗತ್ಯ ಕ್ರಮ ಕೈಗೊಳ್ಳಬೇಕು. 
೨) ಕೊಪ್ಪಳ ಏತ ನೀರಾವರಿ ೩ನೇ ಹಂತದ ಕೃಷ್ಣಾ ಭೀ ಸ್ಕೀಂ ನಲ್ಲಿ ಗಜೇಂದ್ರಗಡ ತಾಲ್ಲೂಕಿನ ನಾಗರಸಕೊಪ್ಪ,ಬೆಣಸಮಟ್ಟಿ,ಗೋಗೇರಿ,ಮಾಟರಂಗಿ ಹಾಗೂ ಉಣಚಗೇರಿ ಸೇರಿದಂತೆ ಹಲವು ಕೆರೆಗಳನ್ನು ತುಂಬಿಸಲು ರೋಣ ವಿಧಾನ ಸಭಾ ಮತಕ್ಷೇತ್ರದ ಶಾಸಕರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು.

ಹೋರಾಟದ ಸ್ಥಳಕ್ಕೆ ಮಾನ್ಯ ತಹಶಿಲ್ದಾರರು ಗಜೇಂದ್ರಗಡ ಮತ್ತು ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಣಕಾಧಿಕಾರಿಗಳು ಗಜೇಂದ್ರಗಡ ಇವರು ಬಂದು ಮನವಿ ಸ್ವೀಕರಿಸಿ ಸ್ಥಳೀಯ ಬೇಡಿಕೆಗಳು ಕುರಿತು ಚರ್ಚೆ ಮಾಡಲು ಎಲ್ಲರೂ ಒಳಗೊಂಡ ಒಂದು ಸಭೆಯನ್ನು ಕರೆಯುತ್ತೆವೆ ಎಂದು ಭರವಸೆ ನೀಡಿದರು. 

ಹೋರಾಟವನ್ನು ಉದ್ದೇಶಿಸಿ ಗಣೇಶ ರಾಠೋಡ್, ಪೀರು ರಾಠೋಡ್, ಸಂಗಪ್ಪ ಅಡವಿ, ರೂಪಲೇಶ ಮಾಳೋತ್ತರ, ಚೆನ್ನಪ್ಪ ಗುಗಲೊತ್ತರ್, ಇನ್ನೂ ಇತರ ರೈತ ಮುಖಂಡರು ಮಾತನಾಡಿದರು.

ಈ ಸಂದರ್ಭದಲ್ಲಿ ಮೋಹನ ರಾಠೋಡ್, ಕುಮಾರ ರಾಠೋಡ್, ವಿ ಆರ್ ಮಾಳತ್ತೋರ್, ಪಿರಪ್ಪ, ಮಂಜು, ಪಿರೇಶ್, ಶಿವಾಜಿ ಇಂಗಳೆ, ಶಿವಾಜಿ ಕಲ್ಲುಡಿ, ಈರಪ್ಪ, ಹನುಮಂತ, ಹಚ್ ಪಿ ಕಸುವಿ, ಕೆ ಪಿ ಕಸುವಿ, ಹನಮಪ್ಪ ಹಡಪದ, ವಿ ಎಚ್ ನಾಗವರ, ಲಕ್ಷ್ಮಣ ಮಗಿ, ಬಮ್ಮಪ್ಪ, ಎಸ್ ಎಲ್ ಗೊಜಲಿ, ಶಿವವ್ವ, ಸೊಮವ್ವ, ರೇಣವ್ವ, ಗೋಂವಿದಪ್ಪ, ಶರಣಪ್ಪ, ಮಲೇಶಪ್ಪ, ಕಳಕಪ್ಪ, ಕಲ್ಲಪ್ಪ, ಶಿವಪ್ಪ, ಆನಂದ, ಯು ಟಿ ಮಾಳೋತ್ತರ್, ಆರ್ ಎಚ್ ಹೊಸಮನಿ, ದೇವರಾಜ್, ದುರಗಪ್ಪ, ಬಬ್ರುವಾಹನ್, ಮಾರುತಿ, ಬಿ ಎಸ್ ಕಲ್ಲಗುಡಿ, ರಮೇಶ್ ಪಮ್ಮಾರ್, ಸಂಗಪ್ಪ, ಪ್ರಕಾಶ, ಮೊಹಲಿ, ಹೊಗಪ್ಪ, ಜನಕಪ್ಪ ಹಾಗೂ ನೂರಾರು ರೈತ ಕೃಷಿ ಕೂಲಿಕಾರರ ಹಾಜರಿದ್ದರು.
Post a Comment

Post a Comment