Gajendragad : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಯ ತಂದೆ, ತಾಯಿಗೆ ಸನ್ಮಾನ : ನಾಡಿನ ಹೆಮ್ಮೆ ಸೈನಿಕ ಸುರೇಶ್ ಹಡಪದ್
ಗಜೇಂದ್ರಗಡ : (May_24_2025)
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ನಮ್ಮಕನ್ನಡದ ಕುವರ ಸುರೇಶ್ ಹಡಪದ್ ಅವರ ತಂದೆ, ತಾಯಿ ಅವರನ್ನ ಸನ್ಮಾನಿಸಿದರು.
ಇದು ನಿಜವಾದ ಗುರು ವಂದನೆ ಕಾರ್ಯಕ್ರಮ ಎಂಬುದನ್ನ ಎಸ್.ಎಂ. ಭೂಮರಡ್ಡಿಯಲ್ಲಿ ನಡೆದ ಬಿ.ಎ ವಿದ್ಯಾರ್ಥಿಗಳು ಸಾಬೀತು ಪಡಿಸಿದ್ದಾರೆ.
ಭಾರತೀಯರೆಲ್ಲರೂ ಪರಿವಾರದೊಂದಿಗೆ ಸುಖವಾಗಿರುವಾಗ, ಭಾರತೀಯ ಸೇನೆ ನಮ್ಮನ್ನ ರಕ್ಷಿಸುತ್ತಿದೆ. ಹೀಗಾಗಿ ನಾವೆಲ್ಲರೂ ಸುಖದಿಂದಿಂದ್ದೇವೆ. ಕರ್ನಾಟಕದ ಕುವರ ಜೊತೆಗೆ ನಮ್ಮೂರಿನ ಎಸ್.ಎಂ.ಬಿ ಕಾಲೇಜಿನ ಹಳೆ ವಿದ್ಯಾರ್ಥಿ ಎಂಬುದು ಇನ್ನೂ ಹೆಮ್ಮೆಯ ವಿಷಯವಾಗಿದೆ.
ಗುರುವಂದನಾ ಕಾರ್ಯಕ್ರಮಕ್ಕೆ ಸುರೇಸ್ ಬರಲಾಗದ ಕಾರಣ, ಅವರ ತಂದೆ ಸುಭಾಷ್ ಹಡಪದ್ ಮತ್ತು ತಾಯಿ ಅಕ್ಕಮ್ಮ ಹಡಪದ್ ಅವರನ್ನ ಸನ್ಮಾನಿಸಿದರು. ಈ ಮೂಲಕ ಹಳೆ ವಿದ್ಯಾರ್ಥಿಗಳ ಬಳಗ ದೇಶಕ್ಕೆ ಗೌರವ ಸಲ್ಲಿಸಿದಂತಾಗಿದೆ ಎಂದರೆ ತಪ್ಪಾಗಲ್ಲ. ಇಂತಹ ಕಾರ್ಯ ಮೆಚ್ಚುವಂತದ್ದು...!
Post a Comment