Gajendragad : ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿದ ಡಾ. ಜಗನ್ನಾಥ್ ರಾಠೋಡ್
ಗಜೇಂದ್ರಗಡ : (May_25_2025)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಸ್.ಎಂ ಭೂಮರಡ್ಡಿ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಜಗನ್ನಾಥ್ ರಾಠೋಡ್ ಗುರುಗಳಿಗೆ ಗೌರವಿಸುವುದು ಶಿಶ್ಯಂದಿರ ಕರ್ತವ್ಯ ಎಂದು ಹೇಳಿದರು. ಶಿಕ್ಷಣ ಮಾತ್ರ ಜೀವನ ಸುಧಾರಿಸಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಉನ್ನತ ಶಿಕ್ಷಣದ ಕೊರತೆ ಇದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಕೊರತೆ ಇಲ್ಲ ಎಂದು ತಮ್ಮ ಅನಿಸಿಕೆ ಹಂಚಿಕೊಡರು.
*ಜಗನ್ನಾಥ್ ರಾಠೋಡ್ ಅವರ ಕಿರು ಪರಿಚು*
ಗಜೇಂದ್ರಗಡದ ಸೇವಾಲಾಲ್ ನಗರದಲ್ಲಿ ಆಗಸ್ಟ್ ಒಂದರ 1970 ರಂದು ತಂದೆ ಲಿಂಬಪ್ಪ ರಾಮಚಂದ್ರಪ್ಪ ರಾಠೋಡ್ ಮತ್ತು ತಾಯಿ ಭೀಮವ್ವ ರಾಠೋಡ್ ಅವರ ಹಿರಿಯ ಪುತ್ರರಾಗಿ ಜನಿಸಿದರು.
ಪ್ರಥಮಿಕ ಶಿಕ್ಷಣ ಆಶ್ರಮ ಶಾಲೆಯಲ್ಲಿ ಕಲಿತರು. ಹೈಸ್ಕೂಲ್ ಶಿಕ್ಷಣವನ್ನ ಎಸ್.ಎಂ.ಬಿ ಯಲ್ಲಿ ಮುಗಿಸಿದರು.
ಪಿಯುಸಿ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಮುಗಿಸಿದರು. ಸ್ನಾತಕ ಜೆ.ಎಸ್.ಎಸ್ ಕಾಲೇಜ್ ಧಾರವಾಡದಲ್ಲಿ ಮತ್ತು ಸ್ನಾತಕೋತ್ತರ ಪದವಿಯನ್ನ ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದಲ್ಲಿ ಪೂರೈಸಿದರು.
ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆ
1996 ರಲ್ಲಿ ನೆಟ್ ಪರೀಕ್ಷೆ ತೇರ್ಗಡೆಯಾದರು.
ಈ ಪರೀಕ್ಷೆ ಬರೆದು, ತೇರ್ಗಡೆಯಾದ ಗಜೇಂದ್ರಗಡ
ತಾಂಡಾದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ, ಸ್ನಾತಕೋತ್ತರ ಪದವಿ ಮುಗಿಸಿದ ಕಾಲೇಜಿನಲ್ಲೇ ಲಕ್ಚರರ್ ಆಗಿ 1997ರಲ್ಲಿ ನೇಮಕಗೊಂಡರು. ಲಕ್ಚರರ್ ಆದ ಬಳಿಕ 2004 ರಲ್ಲಿ ಪಿ.ಹೆಚ್.ಡಿ ಪೂರೈಸಿದರು. ಬಳಿಕ ಒಂದಾದಮೇಲೊಂದರಂತೆ ಹಾಸ್ಟೆಲ್ ವಾರ್ಡನ್, ಹೆಚ್.ಒ.ಡಿ, ಎನ್.ಎಸ್.ಎಸ್. ಹೀಗೆ ಹತ್ತಾರು ಹುದ್ದೆಗಳನ್ನ ಅಲಂಕರಿಸಿದರು. ಇನ್ನು, ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್ 22 ರಾಜ್ಯಗಳ ವಿದ್ಯಾರ್ಥಿಗಳ ಕೂಟ ಆಯೋಜಿಸಿ, ಯಶಸ್ವಿಯಾಗಿ ಕಾರ್ಯಕ್ರಮ ರೂಪಿಸಿಕೊಟ್ಟರು.
ಒಟ್ಟು 18 ವಿದ್ಯಾರ್ಥಿಗಳಿಗಳು ಜಗನ್ನಾಥ್ ರಾಠೋಡ್ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ. ಅಲ್ಲದೇ, 6 ಜನ ವಿದ್ಯಾರ್ಥಿಗಳು ಪಿ.ಹೆಚ್.ಡಿ ಸಂಶೋಧನೆಯಲ್ಲಿ ನಿರತರಾಗಿರುವುದು, ಇವರ ಹೆಗ್ಗಳಿಕೆಗೆ ಮತ್ತೊಂದು ಮೈಲಿಗಲ್ಲಾಗಿದೆ.
ಹೈದ್ರಾಬಾದ್ ನಲ್ಲಿರುವ ಭಾರತ ಸರ್ಕಾರದ
ಭೂ ಗರ್ಭಶಾಸ್ತ್ರದ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಸಿಯನ್ ಇನ್ಫಾರ್ಮೇಶನ್ ಸರ್ವೀಸಸ್ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲವಾರು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು, ನೂರಕ್ಕೂ ಹೆಚ್ಚು ಸಂಶೋಧನಾ ಲೇಖನವನ್ನ ಪ್ರಕಟಿಸಿರುತ್ತಾರೆ.
80ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನೆಗಳನ್ನ ಮಂಡಿಸಿರುತ್ತಾರೆ.
2013ರಿಂದ 2024 ರ ವರೆಗೆ ಕರ್ಮಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕಾರವಾರದ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸಿರುತ್ತಾರೆ.
ವಿಶೇಷವಾಗಿ ಕರ್ನಾಟಕಕ್ಕೆ ಮಹದಾಯಿ ನೀರು ಪೂರೈಕೆ ನೆನೆಗುದಿಗೆ ಬಿದ್ದ ಕೆಲಸವನ್ನ ಕರ್ನಾಟಕ ಸರ್ಕಾರ ಪುನರಾರಂಭಿಸಿದಾಗ, ಕರ್ನಾಟಕ ಸರ್ಕಾರದಿಂದ ಸುಪ್ರೀಂ ಕೋರ್ಟ್ ನ ನೀರು ನ್ಯಾಯಾಧಿಕರಣ ಪೀಠಕ್ಕೆ ಮೀನುಗಾರಿಕಾ ಪರಿಣಿತ ತಜ್ಞರಾಗಿ ನೇಮಕಗೊಂಡು, ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಹೀಗೆ ಇನ್ನಷ್ಟು ಹುದ್ದೆಗಳನ್ನ ಅಲಂಕರಿಸಿ, ಗಜೇಂದ್ರಗಡದ ಕೀರ್ತಿ ಹೆಚ್ಚಿಸಿದ ಡಾ. ಜಗನ್ನಾಥ್ ರಾಠೋಡ್ ಅವರು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದು, ನಮಗೆ ಸಂತಸ ಸಂದಿದೆ. ಅವರಿಗೆ ಮತ್ತೊಮ್ಮೆ ಮಗದೊಮ್ಮೆ ಕಾರ್ಯಕ್ರಮಕ್ಕೆ ಸ್ವಾಗತ....
Post a Comment