ಶಾಂತಗೇರಿ : ( May_29_2025)
ಋತುಸ್ರಾವ ಎಂಬುದು ಮಹಿಳೆಯರಲ್ಲಾಗುವ ಒಂದು ಪ್ರಕ್ರಿಯೆ. ಆ ಸಮಯದಲ್ಲಿ ಕೆಲ ಮೂಢ ನಂಬಿಕೆಗಳು ಗ್ರಾಮೀಣ ಭಾಗದಲ್ಲಿ ಇನ್ನೂ, ಜೀವಂತವಾಗಿದೆ ಎಂದು ಶಾಂತಗೇರಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಬಸನಗೌಡ ಪವಾಡಿಗೌಡರ್ ಹೇಳಿದರು.
ಶಾಂತಗೇರಿ ಆರೋಗ್ಯ ಕೇಂದ್ರದಲ್ಲಿ ನಡೆದ
ಋರುಸ್ರಾವ ನೈರ್ಮಲ್ಯ ನಿರ್ವಹಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ, ಚಮನಶಾಲಬಿ ಶಿರಹಟ್ಟಿ ಪ್ರಾಥಮಿಕ ಸುರಕ್ಷಾಧಿಕಾರಿಗಳು ಸಹ ಗರ್ಭಿಣಿಯರು ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಕಿಶೋರಿಯರಿಗೆ, ಗರ್ಭಿಣಿಯರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಗದಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ, ಏಇಶು ಅಭಿವೃದ್ಧಿ ಯೋಜನಾ ಕಚೇರಿ ರೋಣ, ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ವಿಶೇಷವಾಗಿತ್ತು.
ಪ್ರವೀಣ್ ರಾಠೋಡ್, ಉಮೇಶ್ ಮಾಳೋತ್ತರ್, ವಿಯಕುಮಾರ್ ತುಕ್ಕೊಳ್, ಮಾಹಾಂತೇಶ ಮಾದರ್, ಗಂಗಮ್ಮ ಕಟ್ಟಿಮನಿ, ಆಶಾ ಕಾರ್ಯಕರ್ತೆ ಲೀಲಾವತಿ ಹಿರೇಮಠ, ಕವಿತಾ ಓಲೇಕಾರ್, ಮಂಜುಳಾ ಪೂಜಾರ್, ಅಂಗನವಾಡಿ ಶಿಕ್ಷಕಿಯರು, ಲಕ್ಷ್ಮೀ ಹುಣಸಿಮರದ್, ಭಾರತಿ ಹಿರೇಮಠ, ಸುವರ್ಣ ಚಿಗರಿ ಸೇರಿದಂತೆ ಅಂಗನವಾಡಿ ಕಿಶೋರೊಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Post a Comment