-->
Bookmark

Gadag : ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿ ಲೋಪ : ಸರಿ ಪಡಿಸಲು ಬಾಲು ರಾಠೋಡ್ ಒತ್ತಾಯ


Gadag : ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿ ಲೋಪ : ಸರಿ ಪಡಿಸಲು ಬಾಲು ರಾಠೋಡ್ ಒತ್ತಾಯ 

ಗದಗ : (Oct_10_2025)
ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿನ ಅಸಮರ್ಪಕತೆ ತೊಡಕುಗಳು ಹಾಗೂ ವಯೋಮಿತಿ ಕೈ ಬಿಟ್ಟು ಸರ್ವೇಯಿಂದ ಹೋರ ಉಳಿದ ಎಲ್ಲರ ಸಂಪೂರ್ಣ ಸರ್ವೆ ಮಾಡಲು ಆಗ್ರಹಿಸಲಾಯಿತು. ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.      
ಜಿಲ್ಲಾಧ್ಯಕ್ಷರಾದ ಹುಲಿಗೇಮ್ಮ ಮಾತಿನಮಾತನಾಡಿ,
ಹಲವು ದಶಕಗಳ ಹೋರಾಟವನ್ನು ಪರಿಗಣಿಸಿ ತಮ್ಮ ಸರ್ಕಾರ ಹಿಂದಿನ ಕಾಯ್ದೆಗಳನ್ನು ರದ್ದು ಪಡಿಸಿ ದೇವದಾಸಿ ನಿಷೇಧ ಮಸೂದೆ - 2025ನ್ನು ಅಂಗೀಕರಿಸಿರುವುದು ಮತ್ತು ದೇವದಾಸಿ ಮಹಿಳೆಯರ 3 ತಲೆ ಮಾರುಗಳ ಕುಟುಂಬದವರ ಸಮೀಕ್ಷೆಗೆ ಕ್ರಮ ವಹಿಸಿರುವುದು ಸ್ವಲ್ಪ ತಡವಾಗಿಯಾದರೂ ಕ್ರಮ ವಹಿಸಿರುವ ತಮ್ಮ ಸರ್ಕಾರವನ್ನು ಅಭಿನಂದಿಸುತ್ತೇವೆ ಎಂದರು. 

ಈಗ ನಡೆಯುತ್ತಿರುವ ಆನ್ ಲೈನ್ ಸಮೀಕ್ಷೆಯು ಹಲವಾರು ಕೊರತೆ ಹಾಗು ತೊಂದರೆಗಳಿಂದ ಕೂಡಿ ಅಸಮರ್ಪಕವಾಗಿದೆ‌. 

ನಾವು ಸದರಿ ಸಮೀಕ್ಷೆಯನ್ನು ಪ್ರತಿಗ್ರಾಮದಲ್ಲೂ ದೇವದಾಸಿ ಮಹಿಳೆಯರ ಮನೆ ಮನೆಗೆ ತೆರಳಿ ಈ ಹಿಂದಿನಂತೆ ಸಮೀಕ್ಷೆ ಅರ್ಜಿಗಳನ್ನ ತುಂಬಿಸಲು ಕೇಳಿದ್ದೆವು. ದೇವದಾಸಿ ಮಹಿಳೆಯರು ಮುಗಿಬಿದ್ದು, ತಾಲೂಕಾ ಸಿಡಿಪಿಓ ಕಛೇರಿಗಳಿಗೆ ಎಡ ತಾಕುವಂತಾಗಿದೆ. 
ಪ್ರತಿದಿನ ಸರ್ವರ್ ಸಮಸ್ಯೆ, ಸಮೀಕ್ಷೆಗೆ ಬಳಸುವ ಕಂಪ್ಯೂಟರ್ ಗಳ ಕೊರತೆ, ಸಿಬ್ಬಂದಿಯ ಕೊರತೆಯಿಂದ ಪ್ರತಿದಿನ 20ಕ್ಕಿಂತ ಕಡಿಮೆ ಸಂಖ್ಯೆಯ ಕುಟುಂಬಗಳಷ್ಠೇ ಸಮೀಕ್ಷೆ ಗೊಳಪಡಿಸಲಾಗುತ್ತದೆ. ಇದರಿಂದ ನೂರಾರು ಸಂಖ್ಯೆಯಲ್ಲಿ ಬರುವ ವಯೋವೃದ್ಧ ಮಹಿಳೆಯರು, ಊಟ, ನೀರು, ಶೌಚಾಲಯದ ತೊಂದರೆ ಅನುಭವಿಸಿ, ಬೆಳಗಿನಿಂದ ಸಂಜೆವರೆಗೆ ಕಾದು ಮರಳಿ ವಾಪಾಸು ಬರುವಂತಾಗಿದೆ. ಈ ರೀತಿ, ಈಗಿನ ಗಣತಿಯಿಂದ ಹೊರಗಿಡುವುದು ಅನ್ಯಾಯವಾಗುತ್ತದೆ.

ಆದ್ದರಿಂದ ಈ ಕೂಡಲೆ ಮಧ್ಯ ಪ್ರವೇಶಿಸಿ, ಈ ತೊಡರುಗಳನ್ನು ಮತ್ತು ಅಸಮರ್ಪಕತೆಯನ್ನು ಮತ್ತು ಬೆದರಿಕೆಯ ಅಂಶವನ್ನು ಸರಿಪಡಿಸಲು ಈ ಮೂಲಕ ಒತ್ತಾಯಿಸುತ್ತೇವೆ ಎಂದರು. 


ಇತ್ತ, ಜಿಲ್ಲಾಗೌರವಾಧ್ಯಕ್ಷರಾದ ಬಾಲು ರಾಠೋಡ ಮಾತನಾಡಿ, ಹಕ್ಕೊತ್ತಾಯ ಮಾಡಿದರು. 

1) ಅಂಗನವಾಡಿ ಕೇಂದ್ರಗಳ ಮೂಲಕ ಮಾಹಿತಿ ಸಂಗ್ರಹಿಸಿ ವಿವರವನ್ನು ಆನ್ ಲೈನ್ ಗಣತಿಗೆ ಕ್ರಮವಹಿಸಬೇಕು.

2) ಆನ್ ಲೈನ್ ಗಣತಿ ಸಂದರ್ಭದಲ್ಲಿ ಬಂದ ಮಹಿಳೆಯರನ್ನ ಗೌರವ ಹಾಗು ಉಪಹಾರ, ನೀರು, ಚಹಾ ಮುಂತಾಗಿ ವ್ಯವಸ್ಥೆ ಮಾಡಬೇಕು. ಆನ್ ಲೈನ್ ಗಣತಿ ನೆಲ ಮಹಡಿಯಲ್ಲೆ ಅಗತ್ಯ. ಜೊತೆಗೆ ಹೆಚ್ಚುವರಿ ಪರಿಕರ ಮತ್ತು ಸಿಬ್ಬಂದಿಯೊಂದಿಗೆ ನಡೆಸಬೇಕು. ಗಣತಿಯ ಅವಧಿಯನ್ನು ಪೂರ್ಣ ವಾಗುವವರೆಗೂ ವಿಸ್ತರಿಸಬೇಕು.

3) ಯಾವುದೇ ವಯೋಮಿತಿ ಹಾಗು ಕಾಯ್ದೆಗಳನ್ನು ತೋರಿಸಿ ಬೆದರಿಸದೆ, ಎಲ್ಲ ದೇವದಾಸಿಯರು ಮತ್ತು ಅವರ ಕುಟುಂಬದ ಮೂರು ತಲೆ ಮಾರಿಗೂ ಅನ್ವಯಿಸುವಂತೆ ಗಣತಿಗೆ ಕ್ರಮವಹಿಸಬೇಕು.

4)ದಾಖಲಾತಿಗಳನ್ನು ನೀಡಲು ಸಾಕಷ್ಠು ಭ್ರಷ್ಠಾಚಾರದ ತೊಂದರೆಗೆ ಮಹಿಳೆಯರು ಅವರ ಕುಟುಂಬದ ಸದಸ್ಯರು ಒಳಗಾಗುತ್ತಿದ್ದಾರೆ. ಇದರ ನಿವಾರಣೆಗೆ ಅಗತ್ಯ ಕ್ರಮವಹಿಸಬೇಕು.

5) ಸಮೀಕ್ಷೆಯ ನಂತರ ಈ ಎಲ್ಲ ಕುಟುಂಬಗಳು ಸ್ವಾವಲಂಬಿ ಬದುಕು ನಡೆಸಲು ಅಗತ್ಯವಾದ ಪರಿಣಾಮಕಾರಿ ಪುನರ್ವಸತಿಗೆ ಕ್ರಮವಹಿಸಬೇಕು.

6)  ದೇವದಾಸಿ ಮಹಿಳೆಯರಿಗೆ ನೀಡುವ ಮಾಸಿಕ ಸಹಾಯಧನ ಅಥವಾ ಪೆನ್ಷನ್ ಅನ್ನು ಕನಿಷ್ಟ 5 ಸಾವಿರ ಕ್ಕೆ ಹೆಚ್ಚಿಸಬೇಕೆಂದು ಬಾಲು ರಾಠೋಡ್ ಹಕ್ಕೊತ್ತಾಯ ಮಾಡಿದರು. 

ಪ್ರತಿಭಟನೆಯಲ್ಲಿ ಯಲ್ಲವ್ವ ಸೋನ್ನದ್, ಗೌರವ್ವ ಹಿರೇಮನಿ, ಸುನಂದವ್ವ ಬೂದುರ್, ಕನಕವ್ವ ಮಾದರ್, ರೇಣವ್ವ ಮಾದರ್, ಶಿವವ್ವ ಮಾದರ್, ಮದರವ್ವ ಮಾದರ್, ರೋಣವ್ವ ಮಾದರ್, ದುರಗವ್ವ ಮಾದರ್, ಗಂಗವ್ವ ಮಾದರ್, ದಂಡಕ್ಕ ಪೂಜಾರ್, ತಾರಾಬಾಯಿ ದೊಡ್ಡಮನಿ, ಹುಲಿಗೆವ್ವ ಅಸುಂಡಿ, ಗಾಳೆವ್ವ ಅಸುಂಡಿ, ಲಕ್ಷ್ಮವ್ವ ಸನಾದಿ, ಕಿಟ್ಟೇವ್ವ ಮಾದರ್  ಭಾಗವಹಿಸಿದ್ದರು.
Post a Comment

Post a Comment