-->
Bookmark

Gajendragad : ಹಣ ಕೊಟ್ಟರೇ ಪ್ರಕರಣ ಮುಚ್ಚುತ್ತಾರೆ : ಗಂಭೀರ ಆರೋಪ ಮಾಡಿದ ಸಾರ್ವಜನಿಕರು

Gajendragad : ಹಣ ಕೊಟ್ಟರೇ ಪ್ರಕರಣ ಮುಚ್ಚುತ್ತಾರೆ : ಗಂಭೀರ ಆರೋಪ ಮಾಡಿದ ಸಾರ್ವಜನಿಕರು 
ನಮಗೆ ಕಾರುಡಗಿಮಠ ಆಸ್ಪತ್ರೆ ಬೇಕು : ಸಾರ್ವಜನಿಕರಿಂದ ಮನವಿ 

ಆಸ್ಪತ್ರೆ ಏಳಿಗೆ ಸಹಿಸದವರಿಂದ ಹುನ್ನಾರ : ಸಾರ್ವಜನಿಕರು 
ಗಜೇಂದ್ರಗಡ : (Feb_08_2024)

ಕಾರುಡಗಿಮಠ ಆಸ್ಪತ್ರೆ ಉಳಿಸಿಕೊಡಿ ಎಂದು ಸಾರ್ವಜನಿಕರು ಗಜೇಂದ್ರಗಡ ತಹಶಿಲ್ದಾರರ್ ಕಿರಣಕುಮಾರ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದ ಆಸ್ಪತ್ರೆಯನ್ನ ಹುನ್ನಾರ ನಡೆಸಿ, ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಇದೆಲ್ಲವೂ ಕೊನೆಯಾಗಬೇಕಿದೆ ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು. 
ಮನವಿಯಲ್ಲಿ ಗಮನಿಸಬೇಕಾದ ವಿಷಯವೆಂದರೇ, ಗಜೇಂದ್ರಗಡದಲ್ಲಿ ಕೆಲವು ಪ್ರಕರಣದಲ್ಲಿ ಹಣ ಕೊಟ್ಟರೇ ಸಂಘಟನೆ ಮುಖಂಡರೆ ಬಂದು ಪ್ರಕರಣವನ್ನ ಮುಚ್ಚುತ್ತಾರೆ ಎಂಬ ವಿಷಯ ಪ್ರಸ್ತಾಪಿಸಿದ್ದಾರೆ. ಇದು ಒಂದಲ್ಲ, ಒಂದು ದಿನ ಚರ್ಚೆಯಾಗಬೇಕಾದ ವಿಷಯವೇ ಹೌದು. ಇದು ಗಂಭೀರವಾದ ಆರೋಪವೂ ಹೌದು. ಆಕ್ಸಿಡೆಂಟ್ ಸೇರಿದಂತೆ ಯಾವುದೇ ಘಟನೆಯಲ್ಲಿ ಮೃತ ಪಟ್ಟರೇ, ಅವರನ್ನ ರಕ್ಷಿಸುವ ಕೆಲಸ ನಡೆಯುತ್ತದೆ. ಇದನ್ನೂ, ಗಜೇಂದ್ರಗಡದವರೆಲ್ಲರೂ ಅನುಭವಿಸಿರುತ್ತಾರೆ. ಕೆಲ  ಸಂಘಟನೆ ಮುಖಂಡರು ಇದರಲ್ಲಿ ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಅವರೇ ಬಂದು ಮೃತ ಪಟ್ಟಿದ್ದಾರೆ. ಆಗಿದ್ದು, ಆಗಿ ಹೋಗಿದೆ. ಈಗ ಅವರಿಂದ ಪರಿಹಾರ ಕೊಡಿಸಿದ್ದೇವೆ ಎಂದು ಸಮಜಾಯಿಸಿ, ನೀಡುತ್ತಾರೆ. ಅಪರಾಧಿಗಳಿಗೆ ಶಿಕ್ಷೆ ಕೊಡುವ ಕಾಯಕ ಗಜೇಂದ್ರಗಡಲ್ಲಿ ಮಾಯವಾಗಿದೆ. ಇದನ್ನೆ ಕೆಲವರು ಕಾಯಕ ಮಾಡಿಕೊಂಡಿದ್ದಾರೆ. ಹೀಗಿರುವಾಗ, ಇದನ್ನೆ ಬಂಡವಾಳ ಮಾಡಿಕೊಂಡು ತಮ್ಮ ಜೀವನ ನಡೆಸಿದ್ದಾರೆ. ಇದನ್ನ ಗಮನಿಸಿ, ಕಾರುಡಗಿಮಠ ಆಸ್ಪತ್ರೆ ಏಳಿಗೆ ಸಹಿಸದವರಿಂದ ಇಂತಹ ಘಟನೆ ನಡೆದಿದೆ. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 
ಇಂದಲ್ಲ ನಾಳೆ‌ ಸಾರ್ವಜನಿಕವಾಗಿ ಚರ್ಚೆಗೆ ಬರಬೇಕಿದ್ದ ವಿಷಯ ಈಗ ಚರ್ಚೆಗೆ ನಾಂದಿ ಹಾಡಿದೆ.‌
ಇನ್ನೂ, ಒಂದೆಡೆ, ಆಸ್ಪತ್ರೆ ಬೇಡ ಎಂದು ಪ್ರತಿಭಟನೆ ಮಾಡುವವರು ಒಂದೆಡೆ ಇದ್ದರೇ, ಮತ್ತೊಂದೆಡೆ, ಆಸ್ಪತ್ರೆ ಉಳಿಸಿಕೊಳ್ಳೊಣ‌ ಎಂದು ಸಾರ್ವಜನಿಕರು ಒತ್ತಾಯಿಸಿ, ಮನವಿ ಸಲ್ಲಿಸಿದ್ದಾರೆ. ಇದೆಲ್ಲದರ ನಡುವೆ ಆಸ್ಪತ್ರೆ ಏಳಿಗೆ ಸಹಿಸದವರಿಂದ ಇಂತಹ ಆರೋಪ ಬಂದಿದೆ ಎಂಬುದು ಆರ್ವಜನಿಕರ ಆರೋಪವಾಗಿದೆ.
Post a Comment

Post a Comment