ಇತ್ತಿಚೆಗೆ ಗಜೇಂದ್ರಗಡ ಗುಡ್ಡದ ಮೇಲೆ ಅಳವಡಿಸಿರುವ ಫ್ಯಾನ್ ಬಿದ್ದು, ಘಟನೆ ಮಾಸುವ ಮುನ್ನವೇ ಮತ್ತೊಂದು ಅವಾಂತರ ನಡೆದಿದೆ. ಗಜೇಂದ್ರಗಡದಿಂದ ಕುಂಟೋಜಿ ಕಡೆಗೆ ಹೋಗುವ ಮಾರ್ಗದಲ್ಲಿ ಗೌಡಗೇರಿ ಕ್ರಾಸ್ ಬಳಿ ವಿಂಡ್ ಕಂಪನಿಯ ವಾಹನ ಬಿದ್ದು ಸಂಚಾರಕ್ಕೆ ಅಡೆ ತಡೆ ಉಂಡಾಗಿದೆ.
ಗಜೇಂದ್ರಗಡ ಮತ್ತು ರೋಣ ಸೇರಿದಂತೆ ಜಿಲ್ಲೆಯಾದ್ಯಂತ ವಿಂಡ್ ಕಂಪನಿಯ ವಾಹನಗಳ ಕಾಟ ಜೋರಾಗಿದೆ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಇಲ್ಲಿ ರೈತರಿಗೆ ತೊಂದರೆಯಾಗಿ ಸಾಲು ಸಾಲು ದೂರುಗಳು ಬಂದರೂ ಕ್ಯಾರೆ ಎನ್ನದೇ, ಇಂತಹ ದುರ್ಘಟನೆಗಳು ನಡೆಯುತ್ತಿವೆ. ಇದೆಲ್ಲದಕ್ಕೂ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ. ಈಗ ಗೌಡಗೇರಿ ಕ್ರಾಸ್ ಬಳಿ ವಾಹನ ಬಿದ್ದು, ಸಂಚಾರಕ್ಕೆ ತೊಂದರೆಯುಂಟಾಗಿದೆ.
Post a Comment