Gadag : (SIR) – ASDDO ಪಟ್ಟಿ ಪ್ರಕಟಣೆ Enumeration ಹಂತದ ಅವಧಿ ವಿಸ್ತರಣೆ & Phase-II ಕಾರ್ಯವಿಧಾನ ತಕ್ಷಣ ಪ್ರಕಟಿಸಬೇಕು : ಜಿಲ್ಲಾ ಸಿಪಿಐಎಂ ಆಗ್ರಹ
ಗದಗ : (Aug_07_2026)
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಂಡುಬಂದಿರುವ ಹಲವು ದೋಷಗಳು ಮತ್ತು ವಿಪರೀತ ಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇವೆ ಮತ್ತು ತುರ್ತುಕ್ರಮಗಳಿಗೆ ಒತ್ತಾಯಿಸುತ್ತೇವೆ.
ಇತ್ತೀಚೆಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ASDDO (Absent, Shifted, Dead, Duplicate & Others) ಪಟ್ಟಿಯನ್ನು ಸಾರ್ವಜನಿಕರ ಪರಿಶೀಲನೆಗೆ ಲಭ್ಯಗೊಳಿಸುವ ಪ್ರಕ್ರಿಯೆ ಆರಂಭಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಅದೇ ಸಂದರ್ಭದಲ್ಲಿ, ASDDO ಪಟ್ಟಿಯಲ್ಲಿ ಕೆಲವು ಮತದಾರರ ಹೆಸರುಗಳು ತಪ್ಪಾಗಿ ಸೇರಿರುವ ಪ್ರಕರಣಗಳಿವೆ ಎಂದು ತಾವು ಸಾರ್ವಜನಿಕವಾಗಿ ಒಪ್ಪಿಕೊಂಡಿರುತ್ತೀರಿ.
ಅಂತಹ ತಪ್ಪುಗಳಿಗೆ ಕಾರಣವಾಗಿರುವುದು ಚುನಾವಣಾ ಆಯೊಗವೆ ಇರುವಾಗ ಅದಕ್ಕಾಗಿ ಅರ್ಹ ಮತದಾರರು ಶಿಕ್ಷೆಗೆ ಒಳಗಾಗದಂತೆ ಕ್ರಮ ವಹಿಸುವುದು ತುರ್ತು ಅಗತ್ಯವಾಗಿದೆ.
ಪ್ರಸ್ತುತ ಕರ್ನಾಟಕದಲ್ಲಿ 1.10 ಕೋಟಿಗೂ ಅಧಿಕ ಮತದಾರರ ಹೆಸರುಗಳು ASDDO ಪಟ್ಟಿಯಲ್ಲಿದ್ದು, ತಮ್ಮ ಹೆಸರು ತಪ್ಪಾಗಿ ಸೇರಿದ್ದರೆ ಪರಿಶೀಲಿಸಿ ತಿದ್ದುಪಡಿ ಕೋರುವುದಕ್ಕೆ ಮತದಾರರಿಗೆ ಕೇವಲ ನಾಲ್ಕು ದಿನಗಳ ಸಮಯ ಮಾತ್ರ ಲಭ್ಯವಿದೆ. ಇದು ಸಹಜ ನ್ಯಾಯದ ತತ್ವಗಳಿಗೆ (principles of natural justice) ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ವಿರುದ್ಧವಾಗಿದೆ.
ಬಹಳ ಕಡೆ ಶಿಫ್ಟೆಡ್ ವಿಭಾಗದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಸೇರಿದ ವರದಿಗಳಿವೆ. ಕಾರಣಾಂತರಗಳಿಂದ ವಾಸಸ್ಥಾನ ಬದಲಾಗಿರುವುದನ್ನು ದಾಖಲೆ ಮಾಡಲಾಗದ ಸ್ಥಿತಿಯಲ್ಲಿ ಬಹುಸಂಖ್ಯಾತ ಜನರಿರುವ ದೇಶ ಇದು. ಮತದಾರರ ಪಟ್ಟಿಯನ್ನು ಸಮಗ್ರವಾಗಿ ಸರಿಪಡಿಸುವ ಶುದ್ಧೀಕರಣದ ಹೆಸರಿನಲ್ಲಿ ಶುರು ಮಾಡಿದ ಪ್ರಕ್ರಿಯೆಯ ಪ್ರಾರಂಭದಲ್ಲಿಯೇ ಜನರಿಗೆ ಜೂನ್ 16 ರ ಒಳಗೆ ತಮ್ಮ ಅಧಿಕೃತ ವಾಸ ಸ್ಥಳದ ವಿವರಗಳನ್ನು ಸರಿಪಡಿಸಿಕೊಳ್ಳಲು ಮಾಹಿತಿ ನೀಡಬಹುದಾಗಿತ್ತು. ಅದು ಪರಿಷ್ಕರಣೆ ಯ ಸಂದರ್ಭದಲ್ಲಿ ಬಿ.ಎಲ್.ಓ.ಗಳ ಮೇಲಿನ ಅನಗತ್ಯ ಒತ್ತಡವನ್ನು ತಡೆಯುತ್ತಿತ್ತು, ಸಮಯದ ಉಳಿತಾಯವಾಗುತ್ತಿತ್ತು. ಜನರಲ್ಲಿ ತಮ್ಮ ಮತದಾರ ಪಟ್ಟಿಯ ಪರಿಷ್ಕರಣೆ ಗೆ ತಮ್ಮ ಜವಾಬ್ದಾರಿ ಏನೆಂದು ಮಾಹಿತಿಯೂ ದೊರಕುತ್ತಿತ್ತು. ಇಂತಹ ಕ್ರಮಕ್ಕೆ ಅಂದು ಮುಂದಾಗದೆ ಈಗ ಅದೇ ಕಾರಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಮತದಾರ ರನ್ನು ಹೊರತಳ್ಳುವುದು ಪ್ರಜಾಪ್ರಭುತ್ವ ವಿರೋಧೀ ಕ್ರಮವೇ ಆಗಿದೆ.
ಇದಲ್ಲದೆ, ASDDO ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸುವ ಕಾರ್ಯ ಆರಂಭವಾಗಿದ್ದರೂ, ಇನ್ನೂ ಎಲ್ಲಾ ಜಿಲ್ಲೆಗಳ ಪಟ್ಟಿಗಳು ಪ್ರಕಟಗೊಂಡಿಲ್ಲ. ಇದರಿಂದ ರಾಜ್ಯದ ಅನೇಕ ಮತದಾರರಿಗೆ ತಮ್ಮ ಹೆಸರುಗಳನ್ನು ಪರಿಶೀಲಿಸುವ ಅವಕಾಶವೇ ದೊರೆತಿಲ್ಲ.
ಭಾರತ ಚುನಾವಣಾ ಆಯೋಗದ 27.10.2025ರ ನಿರ್ದೇಶನಗಳು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ವಿಧಾನಗಳನ್ನು ಅನುಸರಿಸುವ ಸಂವಿಧಾನಾತ್ಮಕ ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಕೋರುತ್ತೇವೆ:
ಕರ್ನಾಟಕದ ಎಲ್ಲಾ ಜಿಲ್ಲೆಗಳ ASDDO ಪಟ್ಟಿಗಳನ್ನು ತಕ್ಷಣವೇ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.ಅವು ಸುಲಭವಾಗಿ ಯಾರಿಗೆ ಬೇಕಾದರೂ ಲಭ್ಯವಾಗುವಂತಿರಬೇಕು. ರೀಡೆಬಲ್ ಮಾದರಿಯಲ್ಲಿ ಇರಬೇಕು. ಮತ್ತು ತಾಂತ್ರಿಕ ನೈಪುಣ್ಯತೆ ಇರದ ಮತದಾರರ ಉಪಯೋಗಕ್ಕಾಗಿ ಜಿ.ಬಿ.ಏ, ನಗರ/ ಪುರಸಭೆಗಳು ಮತ್ತು ಪಂಚಾಯತ್ ಕಛೇರಿಗಳು ಸರಕಾರಿ ಶಾಲೆಗಳು ಹೀಗೆ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಪ್ರಕಟಿಸಬೇಕು.
ಮಳೆಗಾಲವಾಗಿರುವುದರಿಂದ ಮಳೆ/ ಗಾಳಿಗೆ ಸಿಕ್ಕಿ ಹಾಳಾಗದಂತಹ ರೀತಿಯಲ್ಲಿ ಪ್ರಕಟಿಸಬೇಕು.
ಎಲ್ಲಾ ಪಟ್ಟಿಗಳು ಪ್ರಕಟಗೊಂಡಿರುವ ಕುರಿತು ಪತ್ರಿಕಾ ಪ್ರಕಟಣೆ, ಸಾಮಾಜಿಕ ಮಾಧ್ಯಮ ಹಾಗೂ ಇತರೆ ಅಧಿಕೃತ ಮಾಧ್ಯಮಗಳ ಮೂಲಕ ವ್ಯಾಪಕ ಸಾರ್ವಜನಿಕ ಮಾಹಿತಿ ನೀಡಬೇಕು.
ಎಲ್ಲಾ ಮತದಾರರಿಗೆ ಸಮರ್ಪಕ ಅವಕಾಶ ದೊರಕುವಂತೆ Enumeration Phase- ಗಣತಿ ಹಂತವನ್ನು *ಕನಿಷ್ಟ ಸೆಪ್ಟೆಂಬರ್ 30, 2026* ವರೆಗೆ ವಿಸ್ತರಿಸಬೇಕು.
ರಾಜ್ಯದಲ್ಲಿ ASDDO ಪಟ್ಟಿಯ ಪ್ರಮಾಣ ಅಸಾಮಾನ್ಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಭಾರತ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದ ಪ್ರತಿಯೊಂದು ಮತಗಟ್ಟೆಯ ASDDO ಪಟ್ಟಿಯ ಸ್ವತಂತ್ರ ಲೆಕ್ಕಪರಿಶೋಧನೆ (Audit) ನಡೆಸಬೇಕು.
Phase-II ಕುರಿತು ತಕ್ಷಣ ಪ್ರಕಟಿಸಬೇಕಾದ ಕಾರ್ಯವಿಧಾನಗಳು (Protocols)
Phase-II ಆರಂಭಕ್ಕೂ ಮುನ್ನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಕೆಳಕಂಡ ವಿಷಯಗಳಲ್ಲಿ ಲಿಖಿತ ಕಾರ್ಯವಿಧಾನಗಳನ್ನು ಪ್ರಕಟಿಸಬೇಕು:
Non-mapped voters ಗಳ ವಿಚಾರಣೆಯನ್ನು ಯಾವ ಅಧಿಕಾರಿ ನಡೆಸುತ್ತಾರೆ?
Logical Discrepancy - ತಾರ್ಕಿಕ ವ್ಯತ್ಯಾಸ ಗಳು ಎಂದು ಅತಾರ್ಕಿಕವಾಗಿ ಗುರುತಿಸಲೇ ಬಾರದು ಎಂದು ಒತ್ತಾಯಿಸುತ್ತೇವೆ. ಹಾಗಿದ್ದೂ ಚುನಾವಣಾ ಆಯೋಗ ಅಂತಹ ಮಾದರಿಯನ್ನು ಅಳವಡಿಸಿಕೊಂಡರೆ
ಹಾಗೆ ಗುರುತಿಸಲಾದ ಮತದಾರರಿಗೆ ಯಾವ ರೀತಿಯ ನೋಟಿಸ್, ವಿಚಾರಣೆ ಮತ್ತು ದಾಖಲೆ ಪರಿಶೀಲನೆ ನಡೆಯುತ್ತದೆ? ಎಂಬುದನ್ನು ತಿಳಿಸಬೇಕು.
ನೋಟಿಸ್ ಮತದಾರರಿಗೆ ಹೇಗೆ ತಲುಪುತ್ತದೆ ? ವಿಚಾರಣೆಯ ದಿನಾಂಕ, ಸ್ಥಳ ಮತ್ತು ಸಮಯವನ್ನು ಮತದಾರರಿಗೆ ಯಾವ ವಿಧಾನದಲ್ಲಿ ತಿಳಿಸಲಾಗುತ್ತದೆ?
ASDDO ಪಟ್ಟಿಯಲ್ಲಿರುವ ಮತದಾರರಿಗೆ Form-6 ಅನ್ನು ಯಾರು ನೀಡುತ್ತಾರೆ?
Form-6 ಅನ್ನು ಯಾರು, ಎಲ್ಲಿ ಹಾಗೂ ಯಾವ ಅವಧಿಯೊಳಗೆ ಸ್ವೀಕರಿಸುತ್ತಾರೆ?
ವಿಚಾರಣೆಯ ನಂತರ ಆದೇಶ ಹಾಗೂ ಮೇಲ್ಮನವಿಯ ಪ್ರಕ್ರಿಯೆ ಏನು?
ಇತರ ರಾಜ್ಯಗಳ ಅನುಭವದ ಆಧಾರದಲ್ಲಿ ಇರುವ ಕಳವಳಕಾರಿ ಅಂಶವೆಂದರೆ- 40 ಕ್ಕಿಂತ ಹೆಚ್ಚಿನ ವಯೋಮಾನದವರು, ಪೋಷಕರು ಮತ್ತು ಮತದಾರರ ವಯಸ್ಸಿನ ಅಂತರ 15 ಕ್ಕಿಂತ ಕಡಿಮೆ ಇದ್ದಲ್ಲಿ ಅವರನ್ನು ಅನುಮಾನಾಸ್ಪದ ವಿಭಾಗಕ್ಕೆ ತಳ್ಳಲ್ಪಡುತ್ತಾರೆ. ಚುನಾವಣಾ ಆಯೋಗ ಮೂಲ ವರ್ಷವೆಂದು ಘೋಷಿಸಿದ 2002 ರ ಪಟ್ಟಿಯನ್ನು ಒದಗಿಸದಂತಹ ಅಪಸವ್ಯಗಳು, ಎಷ್ಟೋ ಮತಗಟ್ಟೆಗಳ ಮಾಹಿತಿಯನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡದಿರುವ ಅಂಶಗಳ ಜೊತೆ, ಇಂದಿಗೂ ಬಾಲ್ಯ ವಿವಾಹಗಳು ಅನಿಯಂತ್ರಿತವಾಗಿ ನಡೆಯುತ್ತಿರುವ ಭಾರತದಂತಹ ದೇಶದಲ್ಲಿ ಎರಡು ದಶಕಗಳ ಹಿಂದಿನ ದಾಖಲೆಗಳನ್ನು ಪರಿಗಣಿಸಿ ಅನುಮಾನಾಸ್ಪದ ಕ್ಕೆ ತಳ್ಳುವುದು ವಾಸ್ತವ ಸಂಗತಿಗಳನ್ನು ಪರಿಗಣಿಸದ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಏನು?
ಕೋಟ್ಯಂತರ ಮತದಾರರ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುವ ಈ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕ, ಏಕರೂಪ ಹಾಗೂ ನ್ಯಾಯಸಮ್ಮತವಾಗಿರುವುದು ಅತ್ಯಗತ್ಯವಾಗಿದೆ. ಆದ್ದರಿಂದ ಮೇಲ್ಕಂಡ ಒತ್ತಾಯಗಳ ಕುರಿತು ತುರ್ತು ಕ್ರಮ ಕೈಗೊಂಡು ಅಗತ್ಯ ಆದೇಶಗಳು ಹಾಗೂ ಸ್ಪಷ್ಟೀಕರಣಗಳನ್ನು ಹೊರಡಿಸುವಂತೆ ಆಗ್ರಹಿಸಿದರು.



Post a Comment