-->
Bookmark

Gajendragad : ಕನ್ನಡ ಗಾನ‌ಕೋಗಿಲೆ ಸೀಜನ್ 02 : ಗ್ರ್ಯಾಂಡ್ ಫಿನಾಲೆಗೆ ಸಕಲ ಸಿದ್ಧತೆ, ಭಾರಿ ಜನಸ್ತೋಮದ ನಿರೀಕ್ಷೆ

Gajendragad : ಕನ್ನಡ ಗಾನ‌ಕೋಗಿಲೆ ಸೀಜನ್ 02 : ಗ್ರ್ಯಾಂಡ್ ಫಿನಾಲೆಗೆ ಸಕಲ ಸಿದ್ಧತೆ, ಭಾರಿ ಜನಸ್ತೋಮದ ನಿರೀಕ್ಷೆ 
ಗಜೇಂದ್ರಗಡ : (Dec_08_2023)
ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಸದಾ ಬೆಂಬಲಿಸುವ ಗಜೇಂದ್ರಗಡ ಪಟ್ಟಣದಲ್ಲಿ ಮತ್ತೊಂದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ದೂರಿ ವೇದಿಕೆ ಸಜ್ಜಾಗಿದೆ. 
ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಅಭಿವೃದ್ಧಿ ವೇದಿಕೆ ಕನ್ನಡ ಗಾನ ಕೋಗಿಲೆ ಸೀಜನ್ - 02 ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಕುಷ್ಟಗಿ ರಸ್ತೆಯಲ್ಲಿರುವ ಶ್ರೀ ಹೀರೆದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ನಡೆಯುವ ಭವ್ಯ ವೇದಿಕೆಯಲ್ಲಿ ನಮ್ಮೂರಿನ ಹೆಮ್ಮೆಯ ಕುವರ ಶ್ರೀರಾಮ್ ಕಾಸರ್, ಜೊತೆಗೆ Zee Tv ಸರಿಗಮಪ ಗಾಯಕ ಟೆಕ್ನಿಕ್ ಹನುಮಂತ, ಪ್ರಥ್ವಿ ಭಟ್, ಸೀತಾರಾಮ ಧಾರಾವಾಹಿ ಖ್ಯಾತಿಯ ವೈಷ್ಣವಿ ಮತ್ತು ಸಿಹಿ ಆಗಮಿಸಲಿದ್ದು, ಭವ್ಯ ವೇದಿಕೆ ಸಜ್ಜಾಗುತ್ತಿದೆ. ಡಿಸೆಂಬರ್ 9 ರಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಆರಂಭವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರ್ನಾಟಕ‌ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ  ವಿನಾಯಕ ಜರತಾರಿ ಮತ್ತು ಗಾಯಕ, ನೃತ್ಯ ಸಂಯೋಜಕ ಕಿರಣ್ ನಿಡಗುಂದಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. 

ವರದಿ : ಕಿರಣ್ ನಿಡಗುಂದಿ
Post a Comment

Post a Comment