Gajendragad : ಇನ್ಮುಂದೆ ರವಿ ಎಸ್ ಗಡೇದವರ್ ಡಾಕ್ಟರ್ : ಸಮಾಜ ಸೇವೆ ಗುರಿತಿಸಿ, ಗೌರವ ಡಾಕ್ಟರೇಟ್
ಗಜೇಂದ್ರಗಡ : ( Feb_15_02_2024)
ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ರಾಜ್ಯ ಉಪಾಧ್ಯಕ್ಷ ರವಿ ಎಸ್ ಗಡೇದವರ್ ಅವರು ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ಹರ್ಯಾಣದ ಮ್ಯುಸಿಕ್ & ಆರ್ಟ್ ಯುನಿವರ್ಸಿಟಿಯಿಂದ ಕೊಡುವ ಅತ್ಯುನ್ನತ ಗೌರವ ಇದಾಗಿದೆ. ರವಿ ಎಸ್ ಗಡೇದವರ್ ಅವರು ಗಜೇಂದ್ರಗಡ ತಾಲೂಕಿನ ಮಾಟರಂಗಿ ಗ್ರಾಮವನ್ನ ಕಾಯಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಪಡೆದು ಮಾದರಿಯಾಗಿದ್ದರು. ಇನ್ನೂ, ಸಾಮೂಹಿಕ ವಿವಾಹ ಮಾಡಿ ಬಡಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಗದಗ ಜಿಲ್ಲೆಯಲ್ಲೇ ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಬಡವರಿಗೆ ಸರ್ಕಾರದ ಸೌಲಭ್ಯ ಕೊಡಿಸಿ, ಹಲವರಿಗೆ ಸಹಾಯ ಮಾಡಿದ್ದಾರೆ. ಇವರು ಎಡಗೈಯಲ್ಲಿ ಮಾಡಿದ್ದನ್ನು ಬಲಗೈಗೂ ತಿಳಿಯದಂತೆ ಸಮಾಜ ಸೇವೆ ಮಾಡುತ್ತಾರೆ. ಕನ್ನಡಾಂಬೆಯ ಸೇವೆಯನ್ನ ಮಾಡಿದ್ದಾರೆ. ಕನ್ನಡದ ನೆಲ ಜಲಕ್ಕೆ ಸಂಬಂಧಿಸಿದಂತೆಯೂ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಜನವರಿ 25 ರಂದು ಹರ್ಯಾಣ ನಗರದಲ್ಲೇ ಗೌರವಿಸಲಾಗಿದೆ. ರವಿ ಎಸ್ ಗಡೇದವರ್ ಅಭಿಮಾನಿ ಬಳಗದಿಂದ ಶುಭಾಶಯ ತಿಳಿಸಲಾಗಿದೆ. ಅವರು ಇನ್ನಷ್ಟು ಯಶಸ್ಸುಗಳಿಸಲಿ ಎಂದಿದ್ದಾರೆ.
ಈ ಪ್ರಶಸ್ತಿ ಸಮಾಜಸೇವೆಯ ಜವಾಬ್ದಾರಿ ಹೆಚ್ಚಿಸಿದೆ ಎಂದು ರವಿ ಎಸ್ ಗಡೇದವರ್ ಕಿರಾ ನ್ಯೂಸ್ ಕನ್ನಡಕ್ಕೆ ತಿಳಿಸಿದ್ದಾರೆ.
Post a Comment