ಗಜೇಂದ್ರಗಡ : (Feb_16_2024)
ರಾಜುರು ಮತ್ತು ಶಾಂತಗೇರಿ ಶಾಲೆಯ ಸಿಬ್ಬಂದಿಗಳಿಗೆ ರೋಣ & ಗಜೇಂದ್ರಗಡ ತಾಲೂಕಿನ ಬಿಇಒ ರುದ್ರಪ್ಪ ಎನ್ ಹುರಳಿ ನೋಟೀಸ್ ನೀಡಿದ್ದಾರೆ. ಫೆಬ್ರವರಿ 15 ರಂದು ನಡೆದ ಸೇವಾಲಾಲ್ ಜಯಂತಿಯಂದು ಶಾಲೆಯ ಸಿಬ್ಬಂದಿಗಳು ಸಂತ ಸೇವಾಲಾಲ್ ಮಹಾರಾಜರಿಗೆ ಪ್ಲಾಸ್ಟಿಕ್ ಹಾರ ಹಾಕಿರುವುದನ್ನ ಕಿರಾ ನ್ಯೂಸ್ ಸುದ್ದಿ ಪ್ರಕಟಿಸುತ್ತಿದ್ದಂತೆ ಕಾರಣ ಕೇಳಿ ಶಾಲೆಗಳಿಗೆ ನೋಟೀಸ್ ನೀಡಲಾಗಿದೆ. ಸುದ್ದಿ ಪ್ರಕಟವಾಗಿ ಕೆಲವೆ ನಿಮಿಷಗಳಲ್ಲಿ ಘಟನಾ ಸ್ಥಳದಲ್ಲಿ ಬಿ.ಇ.ಒ ಹಾಜರಿದ್ದರು. ಸರ್ಕಾರದ ಆದೇಶ ವಿದ್ದರೂ ಕರ್ತವ್ಯ ಲೋಪ ಎಸಗಲಾಗಿದೆ. ಈ ಬಗ್ಗೆ ಮೂರು ದಿನಗಳಲ್ಲಿ ಉತ್ತರ ಕೊಡುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ನೋಟೀಸ್ ನೀಡಲಾಗಿದೆ. ಈ ಹಿಂದೆ ಕ್ಷೇತ್ರದಲ್ಲಿನ ಶಾಲೆಯಲ್ಲಿ ಯಾವುದೇ ಸಮಸ್ಯೆ ಇದೆ ಎಂದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ, ಸಮಸ್ಯೆಯನ್ನ ಬಗೆಹರಿಸುತ್ತಾರೆ. ತುಂಬಾ ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸುವ ಹುರಳಿ strict ಆಫೀಸ್ ಎಂದೆ ಹೆಸರಾಗಿದ್ದು, ಕ್ಷೇತ್ರದಲ್ಲಿ ಚುರುಕಿನ ಸಂಚಾರ ನಡೆಸಿ, ಶಿಕ್ಷಣ ಕ್ಷೇತ್ರ ಸುಧಾರಣೆಗೆ ಶ್ರಮಿಸುತ್ತಿದ್ದಾರೆ
Post a Comment