ಗಜೇಂದ್ರಗಡ : (May_23_2024)
ಎಸ್.ಎಂ.ಬಿ ಕಾಲೇಜಿನಲ್ಲಿ 2004_07 ಪದವಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಇದೇ 24,25 ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ ವಿದೆ.
ಬಿಎ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ ಗಜೇಂದ್ರಗಡದಲ್ಲಿ ಇದೇ ಮೊದಲು ಎಂಬ ಹೆಗ್ಗಳಿಕೆಯೊಂದಿಗೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ಭಾಗವಹಿಸಿದ್ದಾರೆ. ಭಾರತದ ಹೆಮ್ಮೆಯ ಸೈನಿಕ ಗಡಿಯಲ್ಲಿ ಹೋರಾಟ ನಡೆಸಿದ್ದಾನೆ. ಅವರ ತಂದೆ ತಾಯಿಗಳಿಗೆ ಸನ್ಮಾನವೂ ನಡೆಯಲಿದೆ. ಜೊತೆಗೆ ವಿದ್ಯಾರ್ಥಿಗಳ ಕುಟುಂಬ ಸದಸ್ಯರಿಗೆ ವಿಶೇಷ ಆಹ್ವಾನ ವಿದೆ. ಇನ್ನೂ, ಈ ವಿದ್ಯಾರ್ಥಿಗಳ ಮೇ ತಿಂಗಳಲ್ಲಿರುವ ಬರುವ ಹುಟ್ಟುಹಬ್ಬವನ್ನು ಸಹ ಇದೇ ವೇದಿಕೆಯಲ್ಲಿ ಆಚರಿಸಲು ಮುಂದಾಗಿದ್ದಾರೆ. ಹೀಗೆ ಹತ್ತಾರು ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, 24 ಶನಿವಾರದಂದು ಬೆಳಗ್ಗೆಯಿಂದಲೇ ಕಾರ್ಯಕ್ರಮ ನಡೆಯಲಿದೆ.
ಇತ್ತ, 25 ರಂದು ಭಾನುವಾರ ನಡೆಯುವ ಕಾರ್ಯಕ್ರಮಕ್ಕೆ ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ವಿಜ್ಞಾನಿ ಪ್ರೊ. ಡಾ. ಜಗನ್ನಾಥ್ ರಾಠೋಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇವರು ಸಹ ಗಜೇಂದ್ರಗಡದವರಾಗಿದ್ದು, ಎಸ್.ಎಂ.ಬಿಯ ಹಳೆ ವಿದ್ಯಾರ್ಥಿಯಾಗಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದಲ್ಲಿ ಭಿನ್ನ, ವಿಭಿನ್ನ ವಿಶೇಷ ಕಾರ್ಯಕ್ರಮಗಳು ಜರುಗಲಿದೆ ಎಂದು ಸಂತೋಷ್ ಜಾಲಿಹಾಳ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
Post a Comment