-->
Bookmark

Gajendragad : ಜನೌಷಧಿ : ಬಿಜೆಪಿಯಿಂದ ತಪ್ಪು ಮಾಹಿತಿ : B S ಶೀಲವಂತರ್

Gajendragad : ಜನೌಷಧಿ : ಬಿಜೆಪಿಯಿಂದ ತಪ್ಪು ಮಾಹಿತಿ : B S ಶೀಲವಂತರ್ 

ಗಜೇಂದ್ರಗಡ : (May_31_2025)
ರಾಜ್ಯದಲ್ಲಿರುವ 1400 ಜನೌಷಧಿ ಕೇಂದ್ರಗಳಲ್ಲಿ  ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ 180 ಜನೌಷಧಿ ಕೇಂದ್ರಗಳನ್ನು ಮುಚ್ಚಲು ಮಾತ್ರ ಆದೇಶಿಸಲಾಗಿದೆ. ಈ ಬಗ್ಗೆ ಅನಗತ್ಯ ಸುಳ್ಳುಗಳ ಮೂಲಕ ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ .  
 ಸಾರ್ವಜನಿಕರಿಗೆ ಔಷಧಿಗಳು ಉಚಿತವಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲೇ ಜನರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ಹೀಗಿರುವಾಗ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ. 

ಒಂದು ವೇಳೆ ಸರ್ಕಾರೀ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಿಲ್ಲದೆ ಹೋದರೆ ಸರ್ಕಾರಿ ಆಸ್ಪತ್ರೆಗಳು ಭಾರತೀಯ ಔಷಧ ಬ್ಯೂರೋ (ಬಿಪಿಪಿಐ) ಮೂಲಕ ನೇರವಾಗಿ ಜೆನೆರಿಕ್ ಔಷಧಿಗಳನ್ನು ಖರೀದಿಸಲು ಸರ್ಕಾರ ಸೂಚಿಸಿರುತ್ತದೆ.

ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಹೊರಗಿನಿಂದ ಔಷಧಿ ತರುವಂತೆ ಚೀಟಿ ಬರೆದುಕೊಡುವುದು, ತಮ್ಮಲ್ಲಿ ಔಷಧಿಗಳ ದಾಸ್ತಾನು ಇಲ್ಲವೆಂದು ಹೇಳಿ, ನಿಮಗೆ ಬೇಕಾದರೆ ಜನ ಔಷಧಿ ಕೇಂದ್ರದ ಮೂಲಕ ಔಷಧಿ ತೆಗೆದುಕೊಳ್ಳಿ ಎನ್ನುವ ದೂರುಗಳನ್ನು ಕರ್ನಾಟಕದ 13 ಜಿಲ್ಲೆಗಳ ಜನರು ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದರು.

 ಜನರ ಅಹವಾಲನ್ನು ಪರಿಶೀಲಿಸಿ ಮಾನ್ಯ ಆರೋಗ್ಯ ಸಚಿವರು ಆದೇಶಿಸಿದ್ದಾರೆ.

ಬಿ ಎಸ್ ಶೀಲವಂತರ್, 
ಜಿಲ್ಲಾ ಮಾಧ್ಯಮ ವಕ್ತಾರರು, ಜಿಲ್ಲಾ ಕಾಂಗ್ರೆಸ್ ಸಮಿತಿ,ಗದಗ
Post a Comment

Post a Comment