ಭಾವ, ನೃತ್ಯ ಭರತನಾಟ್ಯದ ಬಗ್ಗೆ ಗೊತ್ತಿರೋರಿಗೆ ಹೆಚ್ಚಾಗಿ ಸೆಳೆಯುವ ಕಲೆ ಇದಾಗಿದೆ ಎಂದು ಕುಮಾರಿ ಲತಾ ಮನೋಹರ್ ಹೇಳಿದರು. ಗದಗ ಜಿಲ್ಲೆಯ ವರವಿಯಲ್ಲಿ ನಡೆದ ಭರತನಾಟ್ಯ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಲತಾ, ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯಲ್ಲಿ ಒಲವು. ಬಳಿಕ ಕಲಿಕೆಯಿಂದ ವೃತ್ತಿಯಾಗಿ, ಈಗ "ಮನೋ ರತ್ನಂ" ಭರತನಾಟ್ಯ ಹೇಳಿಕೊಡುತ್ತೇವೆ ಎಂದರು. ಸರಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಲತಾ ಭರತನಾಟ್ಯದಲ್ಲಿ ಎಂ.ಎ ಪದವಿಯನ್ನ ಪಡೆದು ವಿಶ್ವಕರ್ಮ ಸಮಾಜದ ಕೀರ್ತಿ ಹೆಚ್ಚಿಸಿದ್ದಾರೆ.
ವಿಶ್ವಕರ್ಮ ಸಮಾಜದಲ್ಲಿ ಗುರುತಿಸಿಕೊಂಡ ಲತಾ ಮನೋಹರ್, ಶಿಕ್ಷಣ, ವೈತ್ತಿ ಬಳಿಕ ಮಹಿಳೆಯರು ಜೀವನ ರೂಪಿಸಿಕೊಳ್ಳುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದ ಅವರು, ಮೊದಲ ಬಾರಿ ಉತ್ತರ ಕರ್ನಾಟಕಕ್ಕೆ ಬಂದ್ರು. ತುಂಬಾ ಆತ್ಮೀಯತೆಯಿಂದ ಮಾತನಾಡುತ್ತಾರೆ. ಚಿಕ್ಕಂದಿನಿಂದಲೂ ಜೊತೆಗಿರುವ ಬಾಂಧವ್ಯ ಉಂಟು ಮಾಡುತ್ತದೆ.
Web Developer ಆಗಿ ಕರ್ತವ್ಯ ನಿರ್ವಹಿಸುವ ಲತಾ. ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಕಂಡವರು. ವಿಶ್ವಕರ್ಮ ಸಮಾಜದಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆಯಾದರೂ ತಮ್ಮ ಬಗ್ಗೆ ತಾವು ಹೇಳಿಕೊಳ್ಳದ ಮನೋಭಾವ ಲತಾ ಅವರದ್ದಾಗಿದೆ.



Post a Comment